ರಿಕ್ಕಿ ರೈ ಲಂಬೋರ್ಗಿನಿ ಪ್ರಕರಣ: “ಅದು ಡ್ರಿಫ್ಟಿಂಗ್ ಅಲ್ಲ, ಬ್ರೇಕ್ ಫೇಲ್ಯೂರ್!”; ವಕೀಲ ನಾರಾಯಣ ಸ್ವಾಮಿ ನೀಡಿದ ಸ್ಪಷ್ಟನೆ ಏನು?
ಬೆಂಗಳೂರಿನ ಹೃದಯಭಾಗದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರೊಂದು ರಸ್ತೆಯ ಮಧ್ಯೆ ಡ್ರಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕಾರು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರಿಗೆ ಸೇರಿದ್ದರಿಂದ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿತ್ತು. ಆದರೆ, ಈ ಬಗ್ಗೆ ಈಗ ರಿಕ್ಕಿ ರೈ ಪರ ವಕೀಲರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ತಾಂತ್ರಿಕ ಆಯಾಮ ನೀಡಿದ್ದಾರೆ. ವಕೀಲ ನಾರಾಯಣ ಸ್ವಾಮಿ ಅವರ ಪ್ರಮುಖ ಹೇಳಿಕೆಗಳು: ರಿಕ್ಕಿ ರೈ ಪರವಾಗಿ ಮಾತನಾಡಿದ ವಕೀಲ ನಾರಾಯಣ…

