ಶಿಕ್ಷಕರಿಗೆ ಇನ್ಮುಂದೆ ಬೋಧನೆಯೇ ಆದ್ಯತೆ: ಬೋಧಕೇತರ ಹುದ್ದೆಗಳಿಗೆ ವರ್ಗಾವಣೆ ನಿಷೇಧಿಸಿ ಕರ್ನಾಟಕ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ!
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರು ಚುನಾವಣಾ ಕೆಲಸ, ಜನಗಣತಿ ಅಥವಾ ಇತರ ಇಲಾಖೆಗಳ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಶಾಲಾ ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳು ವ್ಯಾಪಕವಾಗಿದ್ದವು. ಈ ಸಮಸ್ಯೆಗೆ ಇತಿಶ್ರೀ ಹಾಡಲು ಕರ್ನಾಟಕ ಸರ್ಕಾರವು **’ಕರ್ನಾಟಕ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ’**ವನ್ನು ಅಂಗೀಕರಿಸಿದೆ. ವಿಧೇಯಕದ ಪ್ರಮುಖ ಅಂಶಗಳು: ಈ ಹೊಸ ಕಾನೂನು ಜಾರಿಗೆ ಬರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಈ ಕೆಳಗಿನ ಬದಲಾವಣೆಗಳು ಆಗಲಿವೆ:…

