ನೆಲಮಂಗಲದಲ್ಲಿ ರಣಬಿಸಿಲಿಗೆ ಬೆಚ್ಚಿದ ನಾಗರ: ತಂಪು ಹುಡುಕುತ್ತಾ ದೇವಾಲಯ ನುಗ್ಗಿದ ಬೃಹತ್ ಕೆರೆಹಾವು; ಬೆಚ್ಚಿಬಿದ್ದ ಅರ್ಚಕರು!
ರಾಜ್ಯದಲ್ಲಿ ಸೂರ್ಯನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೆಲಮಂಗಲ ಮತ್ತು ಹೆಸರಘಟ್ಟ ಭಾಗದಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಬಿಸಿಲಿನ ಬೇಗೆಗೆ ಅರಣ್ಯ ಮತ್ತು ಪೊದೆಗಳಲ್ಲಿರಬೇಕಾದ ಹಾವುಗಳು ಈಗ ಜನರ ವಾಸಸ್ಥಳ ಹಾಗೂ ದೇವಾಲಯಗಳತ್ತ ಮುಖ ಮಾಡುತ್ತಿವೆ. ಇತ್ತೀಚೆಗೆ ಬೆಂಗಳೂರು ಉತ್ತರ ತಾಲ್ಲೂಕಿನ ಸಿಡೇದಹಳ್ಳಿಯ ದೇವಾಲಯವೊಂದರಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ದೇವಾಲಯದೊಳಗೆ ಬೃಹತ್ ಹಾವು: ಸಿಡೇದಹಳ್ಳಿಯ ದೇವಾಲಯದಲ್ಲಿ ಅರ್ಚಕರು ಎಂದಿನಂತೆ ಪೂಜಾ ಕಾರ್ಯಗಳಲ್ಲಿ ತೊಡಗಿದ್ದಾಗ, ಸುಮಾರು 6-7 ಅಡಿ ಉದ್ದದ ಬೃಹತ್ ಕೆರೆಹಾವು (Rat Snake)…

