
ನವದೆಹಲಿ: ಅತ್ಯಾಚಾರದಿಂದ ಗರ್ಭಧಾರಣೆಗೊಂಡ ಅಪ್ರಾಪ್ತೆಯ 30 ವಾರ ಗರ್ಭಪಾತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ಅವಳ ನೋವು ಮತ್ತು ಅವಮಾನವನ್ನು ಊಹಿಸಿ ನೋಡಿ” ಎಂದು ಹೇಳಿದ ಪೀಠ, ಇಂತಹ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಸಮಯ ಮಿತಿ ಇರಬಾರದು ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ, ಗರ್ಭಪಾತದ ಅಂತಿಮ ನಿರ್ಧಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಮೇಲಿದೆ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಪೋಷಕರಿಗೆ ಸೂಕ್ತ ಸಮಾಲೋಚನೆ ನೀಡುವಂತೆ ಏಮ್ಸ್ಗೆ ನಿರ್ದೇಶನ ನೀಡಿದೆ.
ಇದು ಅಪ್ರಾಪ್ತೆಯ ಮೇಲಿನ ಅತ್ಯಾಚಾರದ ಪ್ರಕರಣವಾಗಿರುವುದರಿಂದ, ಗರ್ಭಪಾತವನ್ನು ನಿರಾಕರಿಸಿದರೆ ಆಕೆಗೆ ಜೀವನಪರ್ಯಂತ ಮಾನಸಿಕ ಆಘಾತ ಉಂಟಾಗಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ತಾಯಿಗೆ ಶಾಶ್ವತ ದೈಹಿಕ ಹಾನಿ ಉಂಟಾಗದಿದ್ದರೆ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಿದೆ.
ಇದೇ ವೇಳೆ, ಯಾವುದೇ ಮಹಿಳೆಯನ್ನು, ವಿಶೇಷವಾಗಿ ಅಪ್ರಾಪ್ತೆಯನ್ನು, ಅವಳ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

