ಕೈ ಪಡೆಯಲ್ಲಿ ಉಪಚುನಾವಣೆ ಟಿಕೆಟ್ ವಾರ್: ದಾವಣಗೆರೆ-ಬಾಗಲಕೋಟೆ ಗೊಂದಲ ಬಗೆಹರಿಸಲು ಸುರ್ಜೇವಾಲ ಎಂಟ್ರಿ; ಶಾಸಕರಿಗೆ ಬೀಳುತ್ತಾ ಬ್ರೇಕ್?
ರಾಜ್ಯದಲ್ಲಿ ಉಪಚುನಾವಣೆಯ ರಣಕಹಳೆ ಮೊಳಗಿದೆ. ‘ಕಾದು ನೋಡುವ ತಂತ್ರ’ಕ್ಕೆ ಶರಣಾಗಿದ್ದ ಕಾಂಗ್ರೆಸ್, ಈಗ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕೇವಲ ಅಭ್ಯರ್ಥಿಯ ಆಯ್ಕೆಯಾಗಿ ಉಳಿಯದೆ, ಪಕ್ಷದ ಒಳಗಿನ ಬಣ ರಾಜಕಾರಣ ಮತ್ತು ಕುಟುಂಬದ ಕಲಹವಾಗಿ ಮಾರ್ಪಟ್ಟಿದೆ. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ತುರ್ತಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಟಿಕೆಟ್ ಫೈಟ್: ದಾವಣಗೆರೆ ಮತ್ತು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾದ…

