ಕೆಐಎಡಿಬಿ ಭೂಸ್ವಾಧೀನಕ್ಕೆ ನಂಜನಗೂಡು ರೈತರ ತೀವ್ರ ವಿರೋಧ; ಏಪ್ರಿಲ್ 6 ರಿಂದ ಅನಿರ್ದಿಷ್ಟಾವಧಿ ರಸ್ತೆ ತಡೆ ಚಳವಳಿ ಎಚ್ಚರಿಕೆ!
ನಂಜನಗೂಡು ತಾಲೂಕಿನ ಕಸಬಾ ಹೋಬಳಿಯ ಮುದ್ದಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಐಎಡಿಬಿ (Karnataka Industrial Areas Development Board) ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ತಲತಲಾಂತರದಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಅನ್ನದಾತರು, ತಮ್ಮ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗಾಗಿ ನೀಡಲು ಸಿದ್ಧರಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಘಟನೆಯ ಹಿನ್ನೆಲೆ: 2003ರಲ್ಲಿ ಮುದ್ದಹಳ್ಳಿ, ಸಿಂಧುವಳ್ಳಿಪುರ ಮತ್ತು ಎಲಚಗೆರೆ ಗ್ರಾಮಗಳ ಒಟ್ಟು 448.38 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು . ಅಂದಿನಿಂದಲೂ ರೈತರು ಈ…

