‘ವಾಟ್ಸಾಪ್ ಯುನಿವರ್ಸಿಟಿ’ ಮಾಹಿತಿಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದ್ದು, ‘ವಾಟ್ಸಾಪ್ ಯುನಿವರ್ಸಿಟಿ’ಯಲ್ಲಿ ಹರಡುವ ಮಾಹಿತಿಯನ್ನು ನಂಬಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಶಬರಿಮಲೆ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ವಿಚಾರಣೆ ನಡೆಸುತ್ತಿದ್ದು, ದಾವೂದಿ ಬೊಹರಾ ಸಮುದಾಯದ ಪ್ರಕರಣವನ್ನೂ ಪರಿಗಣಿಸಿತು. ವಿಚಾರಣೆ ವೇಳೆ ವಕೀಲರು ವಿವಿಧ ಅಭಿಪ್ರಾಯಗಳನ್ನು ಉಲ್ಲೇಖಿಸಿದಾಗ, ನ್ಯಾಯಮೂರ್ತಿಗಳು ವೈಯಕ್ತಿಕ ಅಭಿಪ್ರಾಯ ಮತ್ತು ಪರಿಶೀಲಿತ ಮಾಹಿತಿಯ ನಡುವಿನ…

Read More