ಭಾರತದಲ್ಲಿ ಇಂಧನ ಸಂಕಷ್ಟವಿಲ್ಲ: ಪಶ್ಚಿಮ ಏಷ್ಯಾ ಯುದ್ಧದ ನಡುವೆಯೂ ಪೆಟ್ರೋಲ್, ಡೀಸೆಲ್ ಪೂರೈಕೆ ಸುಗಮ – ಹರ್ದೀಪ್ ಪುರಿ ಭರವಸೆ!
ಜಾಗತಿಕವಾಗಿ ಇಂಧನ ಪೂರೈಕೆ ಸರಪಳಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ ಭಾರತದ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿತ್ತು. ಪಶ್ಚಿಮ ಏಷ್ಯಾದಲ್ಲಿನ ಇಸ್ರೇಲ್-ಇರಾನ್ ಸಂಘರ್ಷವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗೂ ಕೊರತೆಗೆ ಕಾರಣವಾಗಬಹುದು ಎಂಬ ಭೀತಿಯಿತ್ತು. ಈ ಎಲ್ಲಾ ಆತಂಕಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೋಕಸಭೆಯಲ್ಲಿ ತೆರೆ ಎಳೆದಿದ್ದಾರೆ. “ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್ಪಿಜಿ ಕೊರತೆಯೇ ಇಲ್ಲ” ಎಂದು ಅವರು ಖಡಾಖಡಿಯಾಗಿ ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಮತ್ತು…

