ಮೈದಾನದಲ್ಲಿ ಸೆಲ್ಫಿ ಕೇಳಿದ ಅಭಿಮಾನಿ: ಒಡೆದ ಫೋನ್ ನೋಡಿ ಹೊಸ ಮೊಬೈಲ್ ಉಡುಗೊರೆ ನೀಡಿದ ಸಂಜು ಸ್ಯಾಮ್ಸನ್!
ಕೆಟ್ ಜಗತ್ತಿನಲ್ಲಿ ಪ್ರತಿಭೆಯ ಜೊತೆಗೆ ಮನುಷ್ಯತ್ವವೂ ಅಷ್ಟೇ ಮುಖ್ಯ ಎಂಬುದನ್ನು ಟೀಮ್ ಇಂಡಿಯಾ ಆಟಗಾರ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇರಳದ ಪಾಲಕ್ಕಾಡಿನಲ್ಲಿ ನಡೆದ ಈ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಅನಿರೀಕ್ಷಿತ ಭೇಟಿ, ಅವಿಸ್ಮರಣೀಯ ಕ್ಷಣ ಪಾಲಕ್ಕಾಡಿನ ಸ್ಥಳೀಯ ಮೈದಾನವೊಂದಕ್ಕೆ ಟಿ. ಸಬರೀಶ್ ಎಂಬ ಯುವಕ ಎಂದಿನಂತೆ ಕ್ರಿಕೆಟ್ ಆಡಲು ಬಂದಿದ್ದರು. ಆದರೆ ಅಲ್ಲಿ ಅವರಿಗೆ ಕಾದಿದ್ದು ಒಂದು ದೊಡ್ಡ ಸರ್ಪ್ರೈಸ್! ಮೈದಾನದ…

